ಮಂಗಳವಾರ, ಜುಲೈ 22, 2014

ಕಾಡಬೇಡ ಓ ನೆನಪೇ ....!

ಉಮ್ಮಳಿಸುತಿದೆ ಎದೆಯಾಳದಿಂದ
ಬದುಕು ಕೊಟ್ಟ ನೆನಪೊಂದು
ತಡೆಯೊಡ್ಡುತ್ತಿದ್ದೇನೆ ಬಲವಂತವಾಗಿ
ಹೊರ ಬಂದು ನೀ ಸೃಷ್ಟಿಸಬೇಡ
ಅಲ್ಲೋಲ ಕಲ್ಲೋಲವೆಂದು...!!
ಕಣ್ಣಾಲಿಗಳು ಕೆಂಪಾಗಿಹುದು
ಬಿರು ಬಿಸಿಲ ಬೇಗೆಗೆ
ಕೆನ್ನೆಗಳು ತೋಯ್ದಿಹುದು
ಬಿಟ್ಟು ಬಿಡದೆ ಹರಿದ ಕಂಬನಿಗೆ...!!


ಅಂತರಂಗದ ಹೊಯ್ದಾಟ
ಬಹಿರಂಗದ ತಾಕಲಾಟ
ಉಚ್ವಾಶ-ನಿಚ್ವಾಶದ ಮೇಲಾಟ
ಎದ್ದೇಳಿಸದಾಗಿದೆ ಗರಿ ಬಿಚ್ಚಿದ ಮನವ...!!
ವಿಶ್ವಾಸದ ಎಳೆ ತುಂಡರಿಸಿ
ಸುಳಿ ಸುಳಿಯಾಗಿ ಬೀಸೋ
ಸುಳಿಗರ್ಾಳಿ ತೆಕ್ಕೆಗೆ ಸಿಲುಕಿ
ಸಾಗುತಿದೆ ದೂರ ದೂರಕೆ
ಕಣ್ಣಂಚಿನ ಒಲವ ಬಿಟ್ಟು
ಕಾಣದಾ ಊರಿಗೆ..........!!
ಉಮ್ಮಳಿಸಬೇಡ ಓ ನೆನಪೇ
ತಿದ್ದಿ.. ತೀಡಿ, ಕೈ ಹಿಡಿದು ಮುನ್ನಡೆಸು
ನಗುವಿರ ಮೊಗದಲ್ಲಿ, ಹೂ ನಗೆಯ ಅರಳಿಸು
ಬದುಕಿಕೊಳ್ಳಲಿ ಜೀವ
ನಿನ್ನದೇ ನೆನಪಿನಲಿ...!! 
                                                          -ನಾಗರಾಜ್ ಬಿ. ಎನ್(೯೮೧೦೫೨೩೭೮)

ಕಾಮೆಂಟ್‌ಗಳಿಲ್ಲ: