ಬುಧವಾರ, ಮೇ 1, 2013


ಪ್ರೇಮಾಗ್ನಿ...

ದಾವಾಗ್ನಿಯ ಬೇಗುದಿಗೆ ಸಿಲುಕಿ,
ಕರಕಲಾಯಿತೇ ಬದುಕು...?
ಹೃನ್ಮನಗಳಲ್ಲಿ ಬಿಡಿಸಿದ ಚಿತ್ರ
ಕಂಬನಿಗೆ ಅಳಿಸಿ ಹೋಯ್ತೇ...?

ಆಗಿಲ್ಲ ಯಾವೊಂದು ಆಕಸ್ಮಿಕವು
ವಿನಿಮಯವೇ ಇದ್ದಿಲ್ಲ ಸಿನಿಕವು
ಎದುರಾದ ಸ್ವಾಭಿಮಾನದ ಕಿಚ್ಚು
ಮೇಲೇಳದಾಗಿಸಿದೆ ಮನದ ಹುಚ್ಚು


ಬೆತ್ತಲಾಗಿದೆ ಬದುಕು
ಅರಿಯದ ಮಾಯೆಗೆ ಸಿಲುಕಿ
ಅಂತರಪಟ ಸರಿದಾಗ ನಿಲರ್ಿಪ್ತ
ಯಾಕೆ ಬೇಕು ಅನ್ಯತಾ ತಾಕಲಾಟ?

ಹುಚ್ಚೆದ್ದು ಕುಣಿವ ಅಲೆಗಳ ಆರ್ಭಟ
ಕೆಚ್ಚೆದೆಯಲಿ ಉಳಿಸಿದೆ ದಿಟ್ಟಹಠ
ಸೋಲು-ಗೆಲುವಲ್ಲ ಬದುಕಿನ ಹೋರಾಟ
ಗೆದ್ದರೆ ಮೆಲ್ಲುಸಿರು, ಸೋತರೆ ನಿಟ್ಟುಸಿರು.... 

ಕಾಮೆಂಟ್‌ಗಳಿಲ್ಲ: