ಅವಳನ್ನು.... ಅವಳ ಪಾಡಿಗೆ ಬಿಟ್ಟು ಬಿಡೋಣ..... ಪ್ಲೀಸ್...!!
ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.
ಪ್ರಕೃತಿ ಮಾತೆ ಈ ಹಿಂದೆ ಎಂದೂ ಯಾರ ಮೇಲೂ ದಬ್ಬಾಳಿಕೆ ನಡೆಸಿಲ್ಲ. ಈಗಲೂ ನಡೆಸುತ್ತಿಲ್ಲ. ಹಾಗೆಯೇ ಮುಂದೆಯೂ ನಡೆಸುವುದಿಲ್ಲ. ಹಾಗಂತ ಅವಳ ತಂಟೆಗೆ ಬಂದವರನ್ನು ಮಾತ್ರ ಅವಳು ಎಂದೂ ಬಿಟ್ಟಿಲ್ಲ. ಬಿಡುವುದೂ ಇಲ್ಲ...!!
ಪ್ರಕೃತಿ ಹೇಗಿದ್ದಾಳೋ ಹಾಗೆಯೇ ನಾವು ಅವಳನ್ನು ಸ್ವೀಕರಿಸಬೇಕು... ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು, ನಮ್ಮ ಸ್ವಾರ್ಥಕ್ಕಾಗಿ ಅವಳ ಮೇಲೆ ದೌರ್ಜನ್ಯ ಎಸಗುತ್ತ, ಅವಳ ಅಸ್ತಿತ್ವಕ್ಕೆ ಪೆಟ್ಟು ನೀಡಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ತಾಜಾ
ಉದಾಹರಣೆ... ಮಹಾರಾಷ್ಟ್ರ ಪುಣೆಯ 'ಮಾಲಿನ್' ಗ್ರಾಮ.
ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿರುವ ವನವಾಸಿ ಸಮಾಜದ ಸುಮಾರು 60 ಕುಟುಂಬಗಳು ಜುಲೈ 30ರಂದು ಗುಡ್ಡ ಜರಿದ ಪರಿಣಾಮ ಸಂಪೂರ್ಣ ನೆಲಸಮವಾಗಿದೆ. 300ರಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿ, ಹೂತುಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈವರೆಗೆ ಅವಶೇಷದಡಿ ಸಿಲುಕಿರುವ ಕೇವಲ 40ರಷ್ಟು ಮೃತ ದೇಹಗಳು ಮಾತ್ರ ದೊರಕಿವೆ. ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರಿದೆ.
ಪುಣೆಯಿಂದ ಕೇವಲ 120 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಜನರು ಆಧುನಿಕತೆಗೆ ಈಗಷ್ಟೆ ತೆರೆದುಕೊಳ್ಳುತ್ತಿದ್ದರು. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಕೃಷಿ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ತಾವು ವಾಸಿ
ಸುವ ಮನೆಗಳ ಹಿಂದೆ ಇರುವ ಇರುವ ಬೆಟ್ಟವು ಇವರಿಗೆ ಸದಾ ಕಾಲ ನೆರಳಾಗಿ ಆಸರೆ ನೀಡುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೆ ಸಉರಿಯುತ್ತಿರುವ ಮಳೆಯಿಂದಾಗಿ, ಆಸರೆ ನೀಡಿದ ಬೆಟ್ಟವೇ ಇವರ ಪ್ರಾಣಕ್ಕೆ ನೆರವಾಯಿತು. ನೋಡು ನೋಡುತ್ತಿದ್ದಂತೆ ಆ ಬೆಟ್ಟ ಮುನ್ನೂರಕ್ಕೂ ಹೆಚ್ಚು ಜೀವಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು...!!
ಬೆಟ್ಟ ಕುಸಿಯಲು ಕಾರಣವೇನು.....?
ಇತ್ತೀಚೆಗೆ ಅಲ್ಲಿ ವಾಸಿಸುವ ವನವಾಸಿ ಕುಟುಂಬದವರು ಕೃಷಿ ಚಟುವಟಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುಡ್ಡದ ತಪ್ಪಲಿನಲ್ಲಿರುವ ಭೂಮಿಯನ್ನು ಕಡಿದು, ಕೊಚ್ಚಿ ಸಮತಟ್ಟು ಮಾಡಿದ್ದರು. ಅಲ್ಲದೆ, ವ್ಯವಸಾಯಕ್ಕೆ ಬೇಕಾಗುವ ರೀತಿಯಲ್ಲಿ ಬೆಟ್ಟವನ್ನು ಕಡಿದಿದ್ದರು. ಬೆಟ್ಟಕ್ಕೆ ಹೊಂದಿಕೊಂಡಿರುವ ನೂರಾರು ಮರಗಳನ್ನು ಕಡಿದು ಬೆಟ್ಟದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದರು. ಅಲ್ಲದೆ, ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ, ತಮ್ಮಲ್ಲಿರುವ ಶಕ್ತಿ ಪ್ರದರ್ಶಿಸಿದ್ದರು. ಸಂದರ್ಭದಲ್ಲಿ ಭಾರೀ ಗಾತ್ರದ ಯಂತ್ರಗಳು ಓಡಾಡಿ ಬೆಟ್ಟವನ್ನೇ ಅಲುಗಾಡಿಸಿತ್ತು. ಇವೆಲ್ಲದರ ಪರಿಣಾಮವಾಗಿ ಬೆಟ್ಟದ ಮಣ್ಣು ಸಡಿಲಗೊಂಡಿದ್ದವು. ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಸಡಿಲಗೊಂಡ ಮಣ್ಣುಗಳು ಕುಸಿಯತೊಡಗಿದ್ದವು. ಕ್ಷಣ ಮಾತ್ರದಲ್ಲಿ ಮಣ್ಣು, ಕೆಸರಿನಡಿ ನೂರಾರು ಜೀವಗಳು ಹೂತು ಹೋದವು..!!
ಪ್ರಕೃತಿ ತನಗೆ ಹೇಗೇ ಬೇಕೋ ಹಾಗೆ ತನ್ನ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಿಸಿಕೊಂಡಿರುತ್ತಾಳೆ. ಅವಳ ಪಾಡಿಗೆ ಅವಳನ್ನು ಬಿಟ್ಟು ಬಿಡಬೇಕು. ಅವಳು ಎಂದಿಗೂ ಮಾನವನ ಮೇಲೆ ತನ್ನ ಬಲ ಪ್ರದರ್ಶನ ಮಾಡಿಲ್ಲ. ಮಾನವನೇ ತನ್ನ ಸ್ವಾರ್ಥಕ್ಕಾಗಿ ಅವಳ ಮುಂದೆ ತನ್ನ ಬಲ ಪ್ರದರ್ಶನ ಮಾಡುತ್ತಾನೆ. ಕಳೆದ ವರ್ಷ ನಡೆದ ಕೇದಾರನಾಥದ ರುದ್ರ ಪ್ರಳಯಕ್ಕೂ ಕೂಡಾ ಮಾನವನ ಸ್ವಾರ್ಥವೇ ಕಾರಣ..!
ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.
ಪ್ರಕೃತಿ ಮಾತೆಯನ್ನು ಅವಳ ಪಾಡಿಗೆ ಬಿಟ್ಟು ಬಿಡೋಣ... ಹಾಗೆಯೇ, ಅವಳ ಮಡಿಲಲ್ಲಿ ಅವಳ ಮಕ್ಕಳಾಗಿ ನಾವು ಬದುಕೋಣ.... ಪ್ಲೀಸ್....!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ